ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಸುಜಿತ್‌ ಕೋರಿ (27) ತನ್ನ ಅಣ್ಣ ಅಶೋಕ್‌ ಕೋರಿ (35) ಎಂಬಾತನನ್ನು ರಾತ್ರಿ ಊಟ ಮಾಡುವಂತೆ ಕೇಳಿದ್ದಕ್ಕೆ ಕೊಲೆ ಮಾಡಿದ್ದಾನೆ.

ಐಸ್ ಕ್ರೀಂ ಮಾರಾಟಗಾರ ಅಶೋಕ್ ಕೋರಿ ಕುಡಿದ ಅಮಲಿನಲ್ಲಿ ಮನೆಗೆ ಹಿಂತಿರುಗಿ ತನ್ನ ಸಹೋದರನನ್ನು ಕೇಳಿದ್ದಾನೆ.

ಸುಜಿತ್ ಅಡುಗೆ ಮಾಡಲು ನಿರಾಕರಿಸಿದ್ದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಸುಜಿತ್ ಕೊಡಲಿ ಎತ್ತಿಕೊಂಡು ತನ್ನ ಸಹೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಘಟನೆಯ ನಂತರ, ಸುಜಿತ್ ಲಕ್ನೋ ಹೊರವಲಯದಲ್ಲಿರುವ ಬಂಟ್ರಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆತನನ್ನು ಬಂಧಿಸಲಾಯಿತು.

ಕೊಲೆಯ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದಕ್ಷಿಣ ವಲಯದ ಹೆಚ್ಚುವರಿ ಡಿಸಿಪಿ ಶಶಾಂಕ್ ಸಿಂಗ್ ತಿಳಿಸಿದ್ದಾರೆ.

ಸಹೋದರರಿಬ್ಬರೂ ಅವಿವಾಹಿತರಾಗಿದ್ದು, ಕೆಲ ವರ್ಷಗಳ ಹಿಂದೆ ಅವರ ತಂದೆ ತಾಯಿ ತೀರಿ ಹೋಗಿದ್ದರು.