ಮೂವರು ಬಾಂಗ್ಲಾದೇಶಿ ಪ್ರಜೆಗಳು ತ್ರಿಪುರಾದ ಚಂದ್ರಾಪುರ ಅಂತಾರಾಜ್ಯ ಬಸ್ ಟರ್ಮಿನಸ್‌ನಿಂದ ಗುವಾಹಟಿಗೆ ಬಸ್ ಹತ್ತಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರನ್ನು ನೂರ್ ಮೊಹಮ್ಮದ್, ಎಂಡಿ ಅಬ್ದುಲ್ಲಾ ಮತ್ತು ಅಸ್ಮಾಲ್ ಹಸೀನಾ ಎಂದು ಗುರುತಿಸಲಾಗಿದ್ದು, ಅವರು ತ್ರಿಪುರಾಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು, ಉದ್ಯೋಗ ಅರಸಿ ಪಂಜಾಬ್‌ಗೆ ಹೋಗಲು ಪ್ರಯತ್ನಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ಬಂಧನಗಳೊಂದಿಗೆ, ಭಾರತೀಯ ಮಧ್ಯವರ್ತಿಗಳ ಸಹಾಯದಿಂದ ಅಕ್ರಮವಾಗಿ ಗಡಿ ದಾಟಿದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 44 ಬಾಂಗ್ಲಾದೇಶಿ ಪ್ರಜೆಗಳನ್ನು ಕಳೆದ ಮೂರು ವಾರಗಳಲ್ಲಿ ತ್ರಿಪುರಾದಲ್ಲಿ ಬಂಧಿಸಲಾಗಿದೆ.